Kalpavruksha Kshetra

|| Moolaramo Vijayate ||

|| Gururajo Vijayate ||

Kalpavruksha Kshetra - Sri Raghavendra Swamy Mutt

Kalpavruksha Kshetra
Sri Raghavendra Swamy Mutt

Nirrmaan Nagar, Mysuru

Upcoming Events

ರಾಯರ ಸ್ವರ್ಣ ಪಾದುಕೆ

ಶ್ರೀ ರಾಘವೇಂದ್ರ ಸ್ವಾಮಿಗಳವರ ಚಿನ್ನದ ಪಾದುಕೆಗಳನ್ನು ನಿರ್ಮಿಸುವ ಕುರಿತಾದ ಪ್ರಕಟಣೆ.

ಶ್ರೀ ಹರಿವಾಯು ಗುರುಗಳ ಪ್ರೇರಣೆಯಿಂದ ಶ್ರೀಮಠದಲ್ಲಿ ಚಿನ್ನದ ಪಾದುಕೆಗಳನ್ನು ಮಾಡಿಸಲು ಸಂಕಲ್ಪಿಸಲಾಗಿದೆ.

ಸದ್ಭಕ್ತರು ಚಿನ್ನ ಅಥವಾ ಹಣದ ರೂಪದಲ್ಲಿ ಸೇವೆ ಸಲ್ಲಿಸುವ ಮೂಲಕ ಶ್ರೀ ರಾಘವೇಂದ್ರಸ್ವಾಮಿಗಳವರ ಕೃಪೆಗೆ ಪಾತ್ರರಾಗಲು ವಿನಂತಿಸಲಾಗಿದೆ.

ಅಂದಾಜು ವೆಚ್ಚ:
750 ಗ್ರಾಂ ಚಿನ್ನಕ್ಕೆ ಅಂದಾಜು 80,00,000/- (ಎಂಬತ್ತು ಲಕ್ಷ) ರೂಪಾಯಿಗಳ ವೆಚ್ಚವಾಗುತ್ತದೆ.

Sri Raghavendra Teertharu

ಶ್ರೀ ರಾಘವೇಂದ್ರಸ್ವಾಮಿಗಳ ಜೀವನದ ಸಂಕ್ಷಿಪ್ತ ಮಾಹಿತಿ

ಮೂಲರೂಪ : ಶಂಕುಕರ್ಣ

ಅವತಾರಗಳು : ಶ್ರೀ ಪ್ರಹ್ಲಾದರಾಜರು, ಶ್ರೀ ಬಾಹ್ಲೀಕರಾಜರು, ಶ್ರೀ ವ್ಯಾಸರಾಜರು

ಮನೆತನ : ಷಾಷ್ಠಿಕ ವಂಶದ ಬೀಗಮುದ್ರೆ ಮನೆತನ

ಗೋತ್ರ : ಗೌತಮ

ತಂದೆ : ಶ್ರೀ ತಿಮ್ಮಣ್ಣ ಭಟ್ಟರು

ತಾಯಿ : ಶ್ರೀಮತಿ ಗೋಪಿಕಾಂಬಾ

ಜನನ : ಕ್ರಿ.ಶ 1595 ನೇ ಮನ್ನಥನಾಮ ಸಂವತ್ಸರದ ಫಾಲ್ಗುಣ ಶುಧ ಗುರುವಾರ ಸಪ್ತಮಿ

ಜನ್ಮ ನಕ್ಷತ್ರ : ಮೃಗಶಿರಾ

ಜನ್ಮ ಸ್ಥಳ : ಭುವನಗಿರಿ (ತಮಿಳುನಾಡು)

ಪೂರ್ವಾಶ್ರಮದ ಹೆಸರು : ಶ್ರೀ ವೆಂಕಟನಾಥ

ಗುರುಗಳು : ಶ್ರೀ ಲಕ್ಷ್ಮೀನರಸಿಂಹಾಚಾರ್ಯರು

ಉಪನಯನ : ಕ್ರಿ.ಶ 1614 ನೇ ಆನಂದನಾಮ ಸಂವತ್ಸರ

ಉನ್ನತ ವಿದ್ಯಾಭ್ಯಾಸ : ಶ್ರೀ ಸುಧೀಂದ್ರತೀರ್ಥ ರಲ್ಲಿ (ಕುಂಭಕೋಣ)

ವಿವಾಹ : ಶ್ರೀಮತಿ ಸರಸ್ವತಿಬಾಯಿ

ಪೂರ್ವಾಶ್ರಮದ ಪುತ್ರರು : ಶ್ರೀ ಲಕ್ಷ್ಮೀನಾರಾಯಣಾಚಾರ್ಯರು

ಸನ್ಯಾಸಿಯಾಗಲು ಸ್ವಪ್ನ ಸೂಚನೆ : ವಿದ್ಯಾದೇವಿಯಾದ ಸರಸ್ವತಿ ದೇವಿಯಿಂದ

ಸನ್ಯಾಸ ಸ್ವೀಕಾರ : ಕ್ರಿ.ಶ 1621 ನೇ ದುರ್ಮತಿನಾಮ ಸಂವತ್ಸರದ ಫಾಲ್ಗುಣ ಶುದ್ಧ ಬಿದಿಗೆ

ಆಶ್ರಮ ನಾಮ : ಶ್ರೀ ರಾಘವೇಂದ್ರತೀರ್ಥರು

ಆಶ್ರಮ ಗುರುಗಳು : ಶ್ರೀ ಸುಧೀಂದ್ರತೀರ್ಥರು

ಗ್ರಂಥಗಳು : ಶ್ರೀ ಮನ್ನ್ಯಾಯಸುಧಾ ಪರಿಮಳ ಇತ್ಯಾದಿ 48 ಗ್ರಂಥಗಳು

ಬಿರುದುಗಳು : ಮಹಾಭಾಷ್ಯ ವೆಂಕಟನಾಥಾಚಾರ್ಯ, ಪರಿಮಳಾಚಾರ್ಯ

ಆಶ್ರಮ ಶಿಷ್ಯರು : ಶ್ರೀ ಯೋಗೀಂದ್ರತೀರ್ಥರು

ಬೃಂದಾವನ ಪ್ರವೇಶ : ಕ್ರಿ.ಶ 1671 ನೇ ವಿರೋಧಿನಾಮ ಸಂವತ್ಸರದ ಶ್ರಾವಣ ಬಹುಳ ಬಿದಿಗೆ, ಶುಕ್ರವಾರ

ಬೃಂದಾವನ ಸ್ಥಳ : ತುಂಗಭದ್ರಾ ನದಿತೀರ (ಮಂತ್ರಾಲಯ)